ದಿನಾಂಕ 02/08/2017ನೇ ಬುಧವಾರದಂದು ನಗರದ ಗೋರಿಗುಡ್ಡೆಯಲ್ಲಿರುವ ಕಿಟ್ಟಲ್ ಮೆಮೋರಿಯಲ್ ಅನುದಾನಿತ ಫ್ರೌಢಶಾಲೆ ಇಲ್ಲಿನ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗೆಗಿನ ಮಾಹಿತಿ ಶಿಬಿರ ಕಾರ್ಯಾಗಾರ ನಡೆಯಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಈ ಕಾರ್ಯಕ್ರಮ ಜರುಗಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಹೇಶ್ ಪತ್ತಾರ್, ಜಿಲ್ಲಾ ಸಂಯೋಜಕರು ಉಡುಪಿ ಜಿಲ್ಲೆ ಭಾರತ ಸೇವಾದಳ ಮತ್ತು ಶ್ರೀ ಆಲ್ಘಾನ್ಸೊ ಪ್ರಾಂಕೋ, ಕಾರ್ಯಕಾರಿ ಸಮಿತಿ ಸದಸ್ಯರು, ದ.ಕ. ಜಿಲ್ಲೆ ರಾಷ್ಟ್ರೀಯ ಸೇವಾದಳ ಇವರು ಭಾಗವಹಿಸಿದ್ದರು. ರಾಷ್ಟ್ರಧ್ವಜವನ್ನು ಹೇಗೆ ಏರಿಸಬೇಕು, ಹಾರಿಸಬೇಕು ಯಾವ ರೀತಿಯಲ್ಲಿ ರಾಷ್ಟ್ರಧ್ವಜಕ್ಕೆ ಧ್ವಜ ವಂದನೆ ನೀಡಬೇಕು, ಯಾವ ಸಂದರ್ಭಗಳಲ್ಲಿ ಯಾವ ರೀತಿ ಧ್ವಜ ಆರೋಹಣ ಅವರೋಹಣ ಮಾಡಬೇಕು ಎಂಬುದರ ಬಗ್ಗೆ ಸಂರ್ಪೂಣ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಅದೇ ರೀತಿ ರಾಷ್ಟ್ರಗೀತೆಯನ್ನು ಯಾವ ರೀತಿ, ಎಷ್ಟು ಸಮಯದ ಒಳಗೆ ಹಾಡಬೇಕು ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.
ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಿಟ್ಟಲ್ ಕಾಲೇಜಿನ ಪ್ರಾಂಶುಪಾಲರಾದ ವಿಠಲ ರೈ, ಕಿಟ್ಟಲ್ ಫ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡಯಾನಾ ಜ್ಯೋತಿ ಪ್ರಾಂಕ್, ಶಾಲಾ ಶಿಕ್ಷಕರಾದ ಉದಯ ಶಂಕರ ನಾಯ್ಕ್, ರಘನಾಥ ಭಟ್, ವಜ್ರ ಅರುಣ ಸತ್ಯವತಿ, ರೇವತಿ, ಮುಂಜುಳಾ, ಅನಿತಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಶ್ರೀ ಕೃಷ್ಣ ನೀರಮೂಲೆ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು, ಸುಮಾರು 200 ಮಂದಿ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.
No Comment
You can post first response comment.