ನಾವೆಲ್ಲರೂ ನಂಬಲೇಬೇಕಾದ ಕಹಿ ಸತ್ಯವೆಂದರೆ, ಭಾರತ ದೇಶವೊಂದರಲ್ಲೇ ವರ್ಷದಲ್ಲಿ 50,000 ಮಂದಿ ಹಾವಿನ ಕಡಿತಕ್ಕೊಳಗಾಗುತ್ತಾರೆ. ಈ ಪೈಕಿ 30,000 ಮಂದಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಸಾಯುತ್ತಾರೆ ಎಂಬುದನ್ನು ಅರಗಿಸಿಕೊಳ್ಳಲು ಕೊಂಚ ಕಷ್ಟವಾಗಬಹುದು. ಭಾರತದಂತಹಾ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ‘ಹಾವು ಕಡಿತ’ ಎನ್ನುವುದು ಒಂದು ಸಾಮಾಜಿಕ ಸಮಸ್ಯೆ ಎಂದರೂ ತಪ್ಪಲ್ಲ. ಆದರೂ ಈ ಹಾವು ಕಡಿತವನ್ನು ಒಂದು ರಾಷ್ಟ್ರೀಯ ಸಮಸ್ಯೆ ಎಂದೇ ಪರಿಗಣಿಸಲಾಗಿಲ್ಲ.
ಈ ವಿಷಯದ ಬಗ್ಗೆ ಸರಿಯಾದ ಮಾಹಿತಿ ಮತ್ತು ಮರಣದ ಬಗ್ಗೆ ದಾಖಲಾತಿಗಳು ಕೂಡಾ ಆಗದಿರುವುದೇ ಬಹಳ ಖೇದಕರವಾದ ವಿಚಾರ. ಮೊದಲೆಲ್ಲಾ ಆಂಟಿಸ್ನೇಕ್ ವಿನಮ್ ( ಂSಗಿ) ಅಂದರೆ “ವಿಷವಿರೋಧಿ ದ್ರಾವಣ” ಸರಿಯಾಗಿ ಲಭ್ಯವಿರುತ್ತಿರಲಿಲ್ಲ. ಈಗ ನಗರ ಪ್ರದೇಶಗಳಲ್ಲಿ ಇದರ ಲಭ್ಯತೆ ಇದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ದೊರಕುತ್ತಿಲ್ಲ. ಸಾಮಾನ್ಯವಾಗಿ ಹಳ್ಳಿಗಾಡಿನ ಗ್ರಾಮೀಣ ಪ್ರದೇಶಗಳ ರೈತಾಪಿ ಜನರು ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ‘ವಿಷವಿರೋಧಿ ದ್ರಾವಣ’ ಲಭ್ಯವಾಗಲೇಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಇಲಾಖೆ , “ಹಾವು ಕಡಿತ ನಿಯಂತ್ರಣ ಮತ್ತು ಚಿಕಿತ್ಸಾ ಕಾರ್ಯವಿಧಾನ” ಎಂಬ ಖಾಯಿದೆಯನ್ನೂ ವಿಶ್ವ ಸಂಸ್ಥೆಯ ಸಹಭಾಗಿತ್ವದಲ್ಲಿ ಭಾರತದಾದ್ಯಂತಹ ಆರಂಭಿಸಲಿದೆ. ಇದರ ಆದೇಶದಂತೆ ಜನರಲ್ಲಿ ಹಾವು ಕಡಿತದ ಬಗೆಗಿನ ಮೂಢನಂಬಿಕೆಯನ್ನು ತೊಲಗಿಸಿ ತಕ್ಷಣವೇ ಸೂಕ್ತ ಚಿಕಿತ್ಸೆ ದೊರಕುವಂತೆ ಅರಿವು ಮೂಡಿಸುವ ಸದುದ್ದೇಶವನ್ನೂ ಹೊಂದಿದೆ.
ನಮ್ಮ ಭಾರತ ದೇಶದಲ್ಲಿ ಏನಿಲ್ಲವೆಂದರೂ 240ಕ್ಕೂ ಹೆಚ್ಚಿನ ಜಾತಿಯ ವಿವಿಧ ಪ್ರಬೇಧಗಳ ಹಾವುಗಳಿವೆ. ಇವುಗಳಲ್ಲಿ ಹೆಚ್ಚಿನ ಹಾವುಗಳು ವಿಷಕಾರಕವಲ್ಲ ಮತ್ತು ಸಣ್ಣ ಗಾಯ ಮತ್ತು ಮಾನಸಿಕವಾದ ನೋವು, ಭಯ ನೀಡಬಹುದೇ ಹೊರತು ಜೀವಕ್ಕೆ ಆಪಾಯವಿಲ್ಲ. ಆದರೆ ಸುಮಾರು 15 ಪ್ರಬೇಧದ ಹಾವುಗಳು ಬಹಳ ವಿಷಪೂರಿತವಾಗಿದ್ದು ಕೆಲವೇ ಗಂಟೆಗಳಲ್ಲಿ ಸಾವು ತಂದೊಡ್ಡಬಹುದು.
ಈ ಕಾರಣದಿಂದಲೇ ಸೂಕ್ತ ಪ್ರಥಮ ಚಿಕಿತ್ಸೆ ಸಕಾಲದಲ್ಲಿ ದೊರೆತಲ್ಲಿ ಸಾವಿನ ಪ್ರಮಾಣವನ್ನು ಕÀಡಿಮೆ ಮಾಡಬಹುದು. ಸಾಮಾನ್ಯವಾಗಿ ಕಾಳಿಂಗ ಸರ್ಪ, ನಾಗರಹಾವು, ಕನ್ನಡಿ ಹಾವು ಮುಂತಾದವುಗಳು ಜೀವಕ್ಕೆ ಅಪಾಯ ತರಬಹುದಾದ ಹಾವಿನ ಪ್ರಬೇಧಗಳು. ‘ಹಾವುಕಡಿತ’ ಗ್ರಾಮೀಣ ಪ್ರದೇಶದ ಮತ್ತು ಬೆಳೆಯುತ್ತಿರುವ ನಗರ ಪ್ರದೇಶಗಳ ಒಂದು ಸಮಸ್ಯೆ. ಹೆಚ್ಚಿನ ಸಾವನ್ನು ಖಂಡಿತವಾಗಿಯೂ ತಡೆಗಟ್ಟಬಹುದು.
ಹಾವು ಕಡಿತವಾದ ಕೂಡಲೇ ಯಾವುದೇ ತಡಮಾಡದೇ ಆಸ್ಪತ್ರೆಗೆ ದೌಡಾಯಿಸಬೇಕು. ಗಾಯವನ್ನು ಕಚ್ಚಿ ರಕ್ತಹೀರುವುದು. ಗಾಯದ ಮೇಲ್ಭಾಗದಲ್ಲಿ ಗಟ್ಟಿಯಾಗಿ ಬಟ್ಟೆಕಟ್ಟುವುದು, ಹಳ್ಳಿಗಳಲ್ಲಿ ನಕಲಿ ವೈದ್ಯರು ಅಥವಾ ಮಾಂತ್ರಿಕರ ಮೋರೆ ಹೋಗುವುದು ಮತ್ತು ಗಿಡಮೂಲಿಕೆಗಳ ಹಳ್ಳಿಮದ್ದು ಮಾಡುವುದರಿಂದ ಅಪಾಯ ತಪ್ಪಿದಲ್ಲ. ಈ ರೀತಿಯ ಚಿಕಿತ್ಸೆ ಅತ್ಯಂತ ಅಪಾಯಕಾರಿ ಮತ್ತು ಖಂಡಿತವಾಗಿಯೂ ಪರಿಣಾಮಕಾರಿಯಾಗದು. ಹಳ್ಳಿಪ್ರದೇಶಗಳಲ್ಲಿ ಜನರಿಗೆ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ವಿಷಪೂರಿತ ಹಾವುಗಳ ಬಗ್ಗೆ ವಿಷರಹಿತ ಹಾವುಗಳ ಬಗ್ಗೆ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಸೂಚನೆ ನೀಡಬೇಕು.
ಕರಪತ್ರಗಳ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ‘ಹಾವುಕಡಿತ’ ದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರ ಮತ್ತು ಸರ್ಕಾರೇತರ ಸ್ವಯಂ ಸೇವಕ ಸಂಸ್ಥೆಗಳು ಮಾಡಬೇಕು. ಗ್ರಾಮೀಣ ಪ್ರದೇಶದ ಜನರ ಮೂಢನಂಬಿಕೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕಿ ಹಾವು ಕಡಿತದ ಪ್ರಾಥಮಿಕ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮನೆ ಮನೆಗಳಲ್ಲಿ ಮಾಡಿಸಬೇಕು. ಎಲ್ಲವೂ ಸರ್ಕಾರದ ಕೆಲಸ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು, ಹಾವುಕಡಿತದ ಬಗೆಗಿನ ಮೂಢನಂಬಿಕೆಯನ್ನು ತೊಡೆದು ಹಾಕಿಸುವ ಕಾರ್ಯಮಾಡಬೇಕು. ಮತ್ತು ಆದಷ್ಟು ಬೇಗ ಹಾವಿನಿಂದ ಕಡಿತಕೊಳ್ಳಗಾದ ವ್ಯಕ್ತಿ ಆಸ್ಪತ್ರೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಅದೇ ರೀತಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ “ವಿಷವಿರೋಧಿ ದ್ರಾವಣ” ಲಭ್ಯವಾಗುವಂತೆ ಮಾಡುವುದು ಸರ್ಕಾರದ ಮತ್ತು ಜನಪ್ರತಿನಿಧಿಗಳ ಹೊಣೆಗಾರಿಕೆಯಾಗಿರಬೇಕು.
ಹಾವು ಕಚ್ಚಿದಾಗ ಏನು ಮಾಡಬೇಕು?
ಕಚ್ಚಿದ ಹಾವು ವಿಷಕಾರಕÀ ಹಾವು ಅಥವಾ ವಿಷರಹಿತ ಹಾವು ಎಂಬುದನ್ನು ಮೊದಲು ನಿರ್ಣಯಿಸಿ. ಆ ಕ್ಷಣದಲ್ಲಿ ನಿರ್ಣಯಿಸಲಾಗದಿದ್ದಲ್ಲಿ ಹಾವಿನ ಬಣ್ಣ ಮತು ವರ್ತನೆಯನ್ನು ವೈದ್ಯರಿಗೆ ಅಥವಾ ಸಹಾಯಕರಿಗೆ ತಿಳಿಸಿ. ವಿಷರಹಿತ ಹಾವು ಎಂದಾದಲ್ಲಿ ಯಾವುದೇ ರೀತಿಯ ಗಾಬರಿಗೊಳಗಾಗದೇ ಎಲ್ಲಾ ಗಾಯಗಳನ್ನು ಉಪಚರಿಸುವಂತೆ ರೋಗ ನಿರೋಧಕ ದ್ರಾವಣ ಬಳಸಿ ಚಿಕಿತ್ಸೆ ನೀಡಲಾಗುತ್ತದೆ.
ನಿಮಗೆ ಕಚ್ಚಿದ ಖಂಡಿತವಾಗಿಯೂ ವಿಷಕಾರಕವೆಂದು ನಿಮಗೆ ಅನ್ನಿಸಿದಲ್ಲಿ ವ್ಯಕ್ತಿಯನ್ನು ಅಲುಗಾಡಿಸದೇ ಮಲಗಿರಲು ತಿಳಿಸಿ. ಆದಷ್ಟು ಕಡಿಮೆ ಚಲನೆ ಇರಲಿ. ಮಲಗಿದ ಸ್ಥಿತಿಯಲ್ಲಿ, ಗಾಯಗೊಂಡ ದೇಹದ ಭಾಗ, ಹೃದಯದ ಭಾಗಕ್ಕಿಂತ ತಗ್ಗಿನ ಪ್ರದೇಶದಲ್ಲಿರುವಂತೆ ನೋಡಿಕೊಳ್ಳಿ. ವ್ಯಕ್ತಿಯಲ್ಲಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ ಪುನಃ ಹಾವು ಕಚ್ಚದಂತೆ ನೋಡಿಕೊಳ್ಳಿ ಮತ್ತು ಹಾವು ಕಚ್ಚಿದ ಜಾಗವನ್ನು ಮೆದುವಾದ ಬಟ್ಟೆಯಿಂದ ಶುಭ್ರವಾದ ಕಲ್ಮಶರಹಿತ ಬಟ್ಟೆಯಿಂದ ಮುಚ್ಚಬೇಕು ಮತ್ತು ಬಿಗಿಯಾಗಿ ಕಟ್ಟುವ ಅವಶ್ಯಕತೆ ಇಲ್ಲ.
ಏನು ಮಾಡಬಾರದು..?
1. ಯಾವುದೇ ರೀತಿಯಲ್ಲಿ ಹಾವು ಕಡಿತವಾದ ಜಾಗಕ್ಕೆ ಪುನಃ ಗಾಯ ಮಾಡಬೇಡಿ. ಹಾವು ಕಡಿತದ ಜಾಗವನ್ನು ಕೈಯಿಂದ ಮುಟ್ಟಬೇಡಿ.
2. ಹಾವು ಕಡಿತದ ಜಾಗವನ್ನು ಬಾಯಿಯಿಂದ ಹೀರುವ ಪ್ರಯತ್ನ ಮಾಡಬೇಡಿ. ಹಾವು ಕಡಿತದ ಮೂರು ನಿಮಿಷದ ಬಳಿಕ ಗಾಯವನ್ನು ಹೀರಿದಾಗ ಕೇವಲ ಒಂದು ಸಾವಿರದಲ್ಲಿ ಒಂದು ಭಾಗದಷ್ಟು ವಿಷ ಮಾತ್ರ ಹೊರತೆಗೆÉಯಬಹುದು. ಮತ್ತು ಗಾಯದಲ್ಲಿ ಕೀವು ಆಗುವ ಸಾಧ್ಯತೆ ಹೆಚ್ಚಾಗಬಹುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅದೇ ರೀತಿ ಗಾಯಗೊಂಡ ಭಾಗವನ್ನು ಕಿತ್ತೆಸೆಯುವ ಪ್ರಯತ್ನವನ್ನು ಮಾಡಬಾರದು. ಇದರಿಂದ ಯಾವುದೆ ರೀತಿಯ ಲಾಭವಿಲ್ಲವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
3. ನೀರು, ಐಸ್ಗಡ್ಡೆ ಹಾಕಬೇಡಿ. ಐಸ್ ಗಡ್ಡೆ ಹಾಕುವುದರಿಂದ ವಿಷದ ಪ್ರಮಾಣ ಕಡಿಮೆಯಾಗುವುದಿಲ್ಲ. ಮತ್ತು ಗಾಯಕ್ಕೆ ರಕ್ತದ ಪ್ರಮಾಣ ಕಡಿಮೆಯಾಗಿ ಮತ್ತಷ್ಟು ಹಾನಿಯಾಗಬಹುದು. ಬಟ್ಟೆಯನ್ನು ಗಾಯದ ಮೇಲ್ಭಾಗದಲ್ಲಿ ಗಟ್ಟಿಯಾಗಿ ಕಟ್ಟಬಾರದು. ಉಪ್ಪಿನ ದ್ರಾವಣ ಪ್ರೋಟಾನಿಯಮ ಪರಮ್ಯಾಂಗನೇಟ್ ದ್ರಾವಣ ಬಳಸಬಾರದು.
4. ವ್ಯಕ್ತಿಗೆ ಯಾವುದೇ ರೀತಿಯ ಆಲ್ಕೋಹಾಲ್, ಕೇಪೇನ್ ಮಿಶ್ರಿತ ದ್ರಾವಣ ಅಥವಾ ಮೆದುಳನ್ನು ಉತ್ತೇಜಿಸುವ ಅಥವಾ ಉದ್ರೇಕಿಸುವ ದ್ರಾವಣ ಅಥವಾ ಔಷಧಿ ನೀಡಬೇಡಿ. ಅದೇ ರೀತಿ ವೈದ್ಯರ ಆದೇಶವಿಲ್ಲದೆ ನೋವುನಿವಾರಕ ಔಷಧಿ ಕೂಡಾ ನೀಡಬಾರದು.
5. ಹಾವು ಕಚ್ಚಿದ ಭಾಗದಲ್ಲಿರುವ ಬಿಗಿಯಾದ ಬಟ್ಟೆ, ಉಂಗುರ, ಚೈನ್ ಇತ್ಯಾದಿಗಳನ್ನು ಕೂಡಲೇ ತೆಗೆಯಬೇಕು. ಯಾಕೆಂದರೆ ವಿಷಪೂರಿತ ಹಾವು ಕಡಿತವಾದ ಕೂಡಲೇ ಆ ಭಾಗ ವಿಪರೀತವಾಗಿ ಊದಿಕೊಳ್ಳಬಹುದು ಮತ್ತು ಇದರಿಂದ ಸ್ಥಳೀಯ ಆಂಗಾಂಗಗಳಿಗೆ ಹೆಚ್ಚಿನ ಘಾಸಿಯಾಗಬಹುದು.
6. ದಯವಿಟ್ಟು ವಿದ್ಯುತ್ ಶಾಕ್ ಕೊಡಬಾರದು. ಇದರಿಂದ ಗಾಯ ಮತ್ತಷ್ಟು ಹೊತ್ತಿಹೋಗಿ ಜೀವಕೋಶಗಳಿಗೆ ಹೆಚ್ಚಿನ ಹಾನಿಯಾಗಬಹುದು.
7. ಆಲ್ಕೋಹಾಲ್ನಿಂದ ಗಾಯವನ್ನು ತೊಳೆಯಲೇಬಾರದು. ಇದರಿಂದ ರಕ್ತನಾಳಗಳು ಹಿಗ್ಗಿಕೊಂಡು ವಿಷ ಬಹಳ ಬೇಗನೆ ರಕ್ತಕ್ಕೆ ಸೇರಿಕೊಳ್ಳಬಹುದು.
8. ಗಾಯಗೊಂಡ ಜಾಗದ ಮೇಲ್ಭಾಗದಲ್ಲಿ ಗಟ್ಟಿಯಾಗಿ ಬಟ್ಟೆಕಟ್ಟಿ ರಕ್ತಪರಿಚಲನೆಯನ್ನು ನಿಲ್ಲಿಸುವ ಕ್ರಮ ಖಂಡಿತವಾಗಿಯೂ ಸಮರ್ಥನೀಯವಲ್ಲ. ಈ ರೀತಿ ಮಾಡುವುದರಿಂದ ಆಂಗಾಂಶಗಳಿಗೆ ಮತ್ತು ಜೀವಕೋಶಗಳಿಗೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಯಾವುದೇ ರೀತಿಯ ಉದ್ವೇಗಕ್ಕೆ ಒಳಗಾಗದೇ, ವ್ಯಕ್ತಿಗೆ ಧೈರ್ಯ ತುಂಬಿ ತಕ್ಷಣವೇ ಹತ್ತಿರದ ಅಸ್ಪತ್ರೆಗೆ ದಾಖಲುಮಾಡಬೇಕು. ಯಾವುದೇ ರೀತಿಯ ಹಳ್ಳಿಮದ್ದು, ಔಷಧಿ, ಮಂತ್ರವಾದ ಮಾಟ ಇತ್ಯಾದಿಗಳ ಮೊರೆ ಹೋಗಲೇಬಾರದು. ಹಾವುಗಳ ಕಡಿತವನ್ನು ನಿರ್ಲಕ್ಷಿಸಲೇ ಬಾರದು. ಸಂಶಯವಿದ್ದಲ್ಲಿ ವೈದ್ಯರ ಸಲಹೆ ಮಾರ್ಗದರ್ಶನ ಪಡೆಯಲೇಬೇಕು ಮತ್ತು ಆಸ್ಪತ್ರೆಗೆ ದಾಖಲಾಗಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ವೈದ್ಯರ ಮತ್ತು ಔಷಧಿ ದೊರಕುವ ವ್ಯವಸ್ಥೆ ಮಾಡಿಸಿಕೊಳ್ಳಬೇಕು. ಜಾಗತ್ತಿನಾದ್ಯಂತ 5 ಮಿಲಿಯನ್ ಮಂದಿ ‘ಹಾವುಕಡಿತಕ್ಕೆ’ ಒಳಗಾಗುತ್ತಾರೆ.
ಏನಿಲ್ಲವೆಂದರೂ ಒಂದು ಲಕ್ಷಮಂದಿ ಸಾವನ್ನಪುತ್ತಾರೆ. ಹಾವು ಕಡಿತ ಎನ್ನುವುದು ವಿಶ್ವದ ಎಲ್ಲಾ ಖಂಡಗಳಲ್ಲಿ ಕಾಣಸಿಗುತ್ತದೆ. (ಅಂಟಾರ್ಟಿಕಾ ಖಂಡವನ್ನು ಹೊರತು ಪಡಿಸಿ) ಅಮೇರಿಕಾ, ಆಸ್ಟ್ರೇಲಿಯಾ, ಯುರೋಪ್ ರಾಷ್ಟ್ರಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇರುತ್ತದೆ. ಉಷ್ಣವಲಯದ ಖಂಡಗಳಾದ ಆಫ್ರಿಕಾ, ಏಷ್ಯಾಖಂಡ ಮತ್ತು ಭಾರತ ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚಿರುತ್ತದೆ. ಜಗತ್ತಿನಾದ್ಯಂತ ಸುಮಾರು 3000 ಪ್ರಬೇಧದ ಹಾವುಗಳಿದ್ದು ಅದರಲ್ಲಿ ಕೆಲವು ಶೇಕಡಾ 15 ಹಾವುಗಳು ಮಾತ್ರ ವಿಷಪೂರಿತವಾಗಿದೆ. ಹಾವಿನ ಕಡಿತ ಬೇಸಗೆಯಲ್ಲಿ ಜಾಸ್ತಿ ಇರುತ್ತದೆ.
ಯಾಕೆಂದರೆ ಬೇಸಗೆಯಲ್ಲಿ ಹಾವುಗಳು ಹೆಚ್ಚು ಕ್ತಿಯಾತ್ಮಕವಾಗಿರುತ್ತದೆ ಉಷ್ಣವಲಯದ ರಾಷ್ಟ್ರಗಳಲ್ಲಿ ಮತ್ತು ಕೃಷಿ ಆಧಾರಿತ ರಾಷ್ಟ್ರದ ಗ್ರಾಮೀಣ ಪ್ರದೇಶಗಳ್ಲಿ ಹಾವು ಕಡಿತದ ಸಂಖ್ಯೆ ಹೆಚ್ಚಾಗಿರುತ್ತದೆ. ಯಾವುದೇ ವಯಸ್ಸಿನಲ್ಲಿ ಹಾವು ಕಡಿತವಾಗಬಹುದು ಆದರೆ ಸಾವಿನ ಪ್ರಮಾಣ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಜಾಸ್ತಿ ಇರುತ್ತದೆ. ಹಾವಿನ ವಿಷದಲ್ಲಿರುವ ಪ್ರೋಟೀನ್ಗಳನ್ನು ಸೈಟೋಟೋಕ್ಸಿನ್ ಹಿಮೋಟೋಕ್ಸಿನ್ ನ್ಯೋರೋಟೋಕ್ಸಿನ್ ಮತ್ತು ಕಾರ್ಡಿಯೋಟೋಕ್ಸಿನ್ ಎಂದು ವಿಂಗಡಿಸಲಾಗಿದೆ. ಸೈಟೋಟೋಕ್ಸಿನ್ ಸ್ಥಳೀಯ ಜೀವಕೋಶಗಳಿಗೆ, ಹಿಮೊಟೋಕ್ಸಿನ್ ರಕ್ತನಾಳಗಳಿಗೆ ಮತ್ತು ರಕ್ತದ ಕಣಗಳಿಗೆ ನ್ಯೂರೋಟೋಕ್ಸಿನ್ ನರಮಂಡಲಕ್ಕೆ ಮತ್ತು ಕಾರ್ಡಿಯೋಟೋಕ್ಸಿನ್ ಹೃದಯದ ಮಾಂಸಖಂಡಗಳಿಗೆ ಹಾನಿಯುಂಟು ಮಾಡುತ್ತದೆ.
ಲಕ್ಷಣಗಳು :
1. ಉಸಿರಾಟದಲ್ಲಿ ತೊಂದರೆ, ತೀರ್ವವಾದ ನಾಡಿ ಬಡಿತ
2. ಕಣ್ಣು ಮಂಜಾಗುವುದು, ಕಣ್ಣಿನ ರೆಪ್ಪೆ ಜಾರಿಕೊಳ್ಳುವುದು
3. ಬಾಯಿಯಲ್ಲಿ ಎಂಜಲು ಜಾಸ್ತಿಯಾಗುವುದು, ವಿಪರೀತ ಬೆವರುವುದು, ಬಾಯಿರುಚಿ ಬದಲಾಗುವುದು, ಎಂಜಲು ನುಂಗಲು ಕಷ್ಟವಾಗುವುದು
4. ಕೈ ಮರಗಟ್ಟುವುದು, ಮುಖದ ಸುತ್ತ ಅಥವಾ ಕಚ್ಚಿದÀ ಜಾಗದ ಬಳಿ ಸಂವೇಧನೆ ಇಲ್ಲದಿರುವುದು
5. ವಾಂತಿ ಬಂದತಾಗುವುದು ಮತ್ತು ವಾಂತಿಯಾಗುವುದು
6. ಪಾಶ್ವವಾಯು ಅಥವಾ ಅಧವಾ ದೇಹದ ಕೆಲವೊಂದು ಭಾಗದ ನಿಯಂತ್ರಣ ಕಳೆದುಕೊಳ್ಳುವುದು
7. ಹಾವಿನ ಹಲ್ಲಿನ ಗುರುತು ಗಾಯದಲ್ಲಿ ಮೂಡುವುದು. ಗಾಯ ಕೆಂಪಾಗಾಗಿ ಊದಿಕೊಂಡು ರಕ್ತ ವಸರಬಹುದು. ವಿಪರೀತವಾದ ನೋವು ಇರಬಹುದು. ದೇಹದ ಬಣ್ಣ ನೀಲಿಯಾಗಬಹುದು. ಕಚ್ಚಿದ ಹಾವಿನ ವಿಷದ ತೀವ್ರತೆ ಮತ್ತು ಸ್ರವಿಸಲ್ಪಟ್ಟ ವಿಷದ ಪ್ರಮಾಣಕ್ಕನುಗುಣವಾಗಿ ದೇಹದಲ್ಲಿ ಲಕ್ಷಣಗಳು ಗೋಚರಿಸುತ್ತದೆ. ನ್ಯೋರೋಟೋಕ್ಸಿನ್ ಮತ್ತು ಕಾರ್ಡಿಯೋ ಟೋಕ್ಸಿನ್ ಪ್ರಮಾಣ ಅಧಿಕವಿದ್ದಲ್ಲಿ ಉಸಿರಾಟ ನಿಲ್ಲುವುದು ಸಾಧ್ಯತೆ ಇದೆ.
ತಡೆಗಟ್ಟುವುದು ಹೇಗೆ..?
ಹಾವು ನಿಜವಾಗಿಯೂ ನಿರುಪದ್ರವಿ. ವಾಸ್ತವದ ವಿಷಯವೆಂದರೆ ಹಾವು ಮನುಷ್ಯನನ್ನು ಕಂಡರೆ ಬೆದರುತ್ತದೆ. ನಾವು ಹಾವುಗಳಿಗೆ ಹೆದರುವುದಕ್ಕಿಂತ ಎರಡು ಪಟ್ಟು ಜಾಸ್ತಿ ಹಾವು ಮನುಷ್ಯ ಪ್ರಾಣಿಗೆ ಹೆದರುತ್ತದೆ. ಅನಗತ್ಯವಾಗಿ ಹಾವುಗಳನ್ನು ಕೆಣಕಬಾರದು. ಹಾವುಗಳನ್ನು ಕಂಡಾಗ ನಾವು ಬೆದರದೆ ಅವುಗಳನ್ನು ಅದರ ಪಾಡಿಗೆ ಬಿಟ್ಟಲ್ಲಿ ಹೆಚ್ಚಿನ ಹಾವಿನ ಕಡಿತಗಳನ್ನು ತಪ್ಪಿಸಬಹುದು ಹಾವುಗಳಿಗೆ ನಾವು ಕಿರುಕುಳ ನೀಡಿದಾಗ ಹಾವು ಜೀವಭಯದಿಂದ ಭಯಗೊಂಡಾಗ ಮಾತ್ರ ಮನುಷ್ಯನ ಮೇಲೆ ಎರಗಿ ಬೀಳುತ್ತದೆ. ಇದು ಹಾವುಗಳು ಜೀವರಕ್ಷಣೆಗೆ ಮಾಡುವ ಪ್ರತಿಕ್ರಿಯೆ ಮಾತ್ರ.
ಯಾವುದೇ ರೀತಿಯ ಹಾವುಗಳನ್ನು ಮುಟ್ಟಲು ಕೆಣಕಲು ಮತ್ತು ಕೊಲ್ಲಲು ಹೋಗಬಾರದು. ಎಲ್ಲಾ ಜೀವಿಗಳಿಗೂ ಈ ಭೂಮಂಡಲದಲ್ಲಿ ಬದುಕಲು ಸ್ವಾತಂತ್ರ್ಯ ಇದೆ ಎಂಬುದನ್ನು ಯಾವತ್ತೂ ನೆನಪಿಟ್ಟು ಕೊಳ್ಳಬೇಕು. ಸಾಮಾನ್ಯವಾಗಿ ಮನುಷ್ಯ ಆಲ್ಕೋಹಾಲ್ ಸೇವನೆ ಮಾಡಿದಾಗ ಹುಚ್ಚು ಭಂಡ ಧೈರ್ಯದಿಂದ ಹಾವನ್ನು ಹಿಡಿಯಲು ಹೋಗಿ ತೊಂದರೆಗೊಳಗಾಗುತ್ತಾರೆ. ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಅದಲ್ಲದೆ ಮಧ್ಯಪಾನದ ಬಳಿಕ ಮನುಷ್ಯನ ಮೆದುಳು ಕೈ ಮನಸ್ಸುಗಳ ತಾಳಮೇಳ ಹೊಂದಿಕೆಯಾಗದೆ, ಭಂಡತನ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ.
ಗ್ರಾಮೀಣ ಪ್ರದೇಶಗಲ್ಲಿ ಹಳ್ಳಕೊಳ್ಳÀಗಳಲ್ಲಿ, ಹೊಲಗದ್ದೆಗಳಲ್ಲಿ, ಕಾಡುಮೇಡುಗಳಲ್ಲಿ ವಾಸಿಸುವ ಹಾವು ರೈತನ ಮಿತ್ರ. ಹಳ್ಳಿಗಳಲ್ಲಿ ಕೆಲಸಮಾಡುವಾಗ ಉದ್ದನೆಯ ಪ್ಯಾಂಟ್ ಮತ್ತು ಕಾಲುಮುಚ್ಚುವ ಬೂಟು ಧರಿಸಿದಲ್ಲಿ ಉತ್ತಮ. ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇದು ಸಾಧ್ಯವಾಗದೇ ಹೋದರೂ ಮುಂದುವರಿದ ರಾಷ್ಟ್ರಗಳಲ್ಲಿ ಈ ರೀತಿಯಿಂದ ಹಾವಿನ ಕಡಿತದ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಒಟ್ಟಿನಲ್ಲಿ ಹಾವು ಕೂಡಾ ಒಂದು ಜೀವಿ ಅದಕ್ಕೂ ಬದುಕುವ ಸ್ವಾತಂತ್ರ್ಯ ಇದೆ ಎಂದು ಅರಿತಲ್ಲಿ ಹೆಚ್ಚಿನ ಹಾವಿನ ಕಡಿತವನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.
ಕೊನೆಮಾತು :
ಹಾವು ಬಹಳ ಸೋಜಿಗದ ಜೀವಿ. ಭೂಮಿ, ಸಮುದ್ರ, ಮರುಭೂಮಿ, ಕೆರೆ, ತೊರೆ, ಸರೋವರ, ಹೊಲ, ಗುಡ್ಡ, ಕಾಡು -ಮೇಡು ಹೀಗೆ ಎಲ್ಲಾ ಕಡೆಯೂ ಬದುಕುವ ಅಸಾಮಾನ್ಯ ಸಾಮಥ್ರ್ಯಹೊಂದಿದೆ. ಯಾವುದೇ ರೀತಿಯ ಉತ್ತೇಜನ ನೀಡದಿದ್ದಲ್ಲಿ ಹಾವು ಮನುಷ್ಯನಿಗೆ ಉಪಕಾರಿ. ಮಾಂಸಹಾರಿಯಾಗಿರುವ ಹಾವು ಸಣ್ಣ ಪುಟ್ಟ ಕ್ರಿಮಿಕೀಟ, ಹಕ್ಕಿ, ಸಣ್ಣಪುಟ್ಟ ಹಾವುಗಳನ್ನು ತಿಂದು ಬದುಕುತ್ತದೆ. ಮತ್ತು ರೈತರಿಗೆ ಸಹಾಯಮಾಡುತ್ತದೆ.
ಶೀತರಕ್ತ ಪ್ರಾಣಿಯಾದ ಹಾವು ತಮ್ಮ ದೇಹದ ಉಷ್ಣತೆಯನ್ನು ಹೊರಗಿನ ವಾತಾವರಣಕ್ಕೆ ಹೊಂದಿಸಿಕೊಳ್ಳಲಾರದು. ಬೇಸಗೆಯಲ್ಲಿ ಅವುಗಳು ಚಟುವಟಿಕೆ ಹೆಚ್ಚಾಗಿದ್ದು 25ರಿಂದ 32. ಸೆಲ್ಸಿಯಸ್ ಉಷ್ಣತೆಯಲ್ಲಿ ಹೆಚ್ಚಾಗಿ ಬಹಳ ಕ್ರಿಯಾತ್ಮಕವಾಗಿರುತ್ತದೆ. ಹಾವು ಕಚ್ಚಿದಾಗ ವಿಷ ಬರಲೇಬೇಕೆಂದಿಲ್ಲ. ವಿಷಪೂರಿತ ಹಾವುಗಳು ತಮ್ಮ ಸೂಸುವ ಪ್ರಕ್ರಿಯೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುತ್ತದೆ.
ಶೇಕಡಾ 25% ಪ್ರಮಾಣ ಬರೀ ವಿಷರಹಿತ ಕಡಿತವಾಗಿರುತ್ತದೆ. ಸುಮಾರು 5 ಮಿಲಿಯನ್ ಹಾವು ಕಡಿತ ವಿಶ್ವದಾದ್ಯಂತ ವರ್ಷವೊಂದರಲ್ಲಿ ಕಾಣಸಿಗುತ್ತದೆ. ಏನಿಲ್ಲವೆಂದರೂ 1ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಭಾರತ ದೇಶವೊಂದರಲ್ಲಿ ಸುಮಾರು ವರ್ಷದಲ್ಲಿ 50,000 ಮಂದಿ ಹಾವು ಕಡಿತಕೊಳ್ಳಗಾಗುತ್ತಾರೆ. ಮತ್ತು 30,000 ಮಂದಿ ಸಾವನ್ನಪ್ಪುತ್ತಾರೆ. ಹೆಚ್ಚಿನ ಮಂದಿ ಪ್ರಾಥಮಿಕ ಚಿಕಿತ್ಸೆ ಮತ್ತು “ವಿಷ ನಿವಾರಣ ಔಷಧಿಯ” ಅಲಭ್ಯತೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ನೆನೆಪಿರಲಿ, ‘ಹಾವಿನ ದ್ವೇಷ ಹನ್ನೆರಡು ವರುಷ’ ಎನ್ನುವುದು ಬರೀ ಸಿನೇಮಾದಲ್ಲಿ ಇರುವ ಸಂಭಾಷÀಣೆ ಮಾತ್ರ. ಹಾವಿಗೂ, ದ್ವೇಷಕ್ಕೂ, ಹಾವಿನ ಕಡಿತಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇವೆಲ್ಲಾ ಕಾಕತಾಳೀಯ ಹಾವು, ದ್ವೇಷ, ಹಾವು ಕಡಿತದ ಬಗೆಗಿನ ಮೂಢನಂಬಿಕೆಗಳನ್ನು ತೊಡೆದು ಹಾಕಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಪ್ರಾಣ ಉಳಿಸಬಹುದು.
ಮಾಟ, ಮಂತ್ರ, ತಾಯಿತ, ಹಳ್ಳಿಮದ್ದು, ಗಿಡಮೂಲಿಕೆ ಇತ್ಯಾದಿ ಅವೈಜ್ಞಾನಿಕ ವಿಧಾನಗಳಿಂದ ಪ್ರಾಣಕ್ಕೇ ಸಂಚಕಾರ ಬರಬಹುದು. ಸಮಯ ಪ್ರಜ್ಞೆ ಮತ್ತು ಸಾಂಧರ್ಬಿಕ ಪ್ರಜ್ಞೆಯಿಂದ, ನೀವು ವೈದ್ಯರಲ್ಲದಿದ್ದರೂ ಜೀವ ಉಳಿಸಿದ ಸಾರ್ಥಕತೆ ನಿಮ್ಮದಾಗಬಹುದು. ಅದರಲ್ಲಿ ಸಿಗುವ ನೆಮ್ಮದಿ, ಶಾಂತಿ ಮತ್ತು ಸಂತೋಷ ಜಗತ್ತಿನ ಇನ್ನಾವುದೇ ಕಾರ್ಯಗಳಿಂದ ಸಿದ್ದಿಸದು.
No Comment
You can post first response comment.